ರಮಾ ಏಕಾದಶಿ ಆಶ್ವಯುಜ ಬಹುಳ ಪಕ್ಷದ ಏಕಾದಶಿ ತಿಥಿ. ದೀಪಾವಳಿಗೆ ಮೊದಲು ಬರುವ ಕೊನೆಯ ಏಕಾದಶಿ ಇದು. ಕರ್ನಾಟಕದ ಅಮಾಂತ ಪದ್ಧತಿಯಲ್ಲಿ ಇದು ಆಶ್ವಯುಜ ಮಾಸಕ್ಕೆ ಸೇರುತ್ತದೆ. ಉತ್ತರ ಭಾರತದ ಪೂರ್ಣಿಮಾಂತ ಪಂಚಾಂಗಗಳು ಇದೇ ದಿನವನ್ನು ಕಾರ್ತಿಕ ಮಾಸದಲ್ಲಿ ತೋರಿಸುತ್ತವೆ. ತಿಥಿಯೂ ದಿನವೂ ಒಂದೇ; ಮಾಸದ ಹೆಸರು ಮಾತ್ರ ಬೇರೆ.
ಹೆಸರು
ಇಲ್ಲಿಯ ರಮಾ ಎಂದರೆ ಲಕ್ಷ್ಮಿಯ ಹೆಸರು, ಮೊದಲ ಅಕ್ಷರ ದೀರ್ಘ. ದಶರಥನ ಮಗನಾದ ರಾಮನಲ್ಲ. ಈ ಗೊಂದಲ ಸಾಮಾನ್ಯವಾದ್ದರಿಂದ ಸ್ಪಷ್ಟಪಡಿಸುವುದು ಅಗತ್ಯ. ಈ ಪಕ್ಷ ಮುಂದೆ ದೀಪಾವಳಿಗೆ, ಲಕ್ಷ್ಮೀ ಪೂಜೆಗೆ ಹೋಗುತ್ತದೆ; ಹೆಸರು ಅದಕ್ಕೆ ಹೊಂದಿಕೊಳ್ಳುತ್ತದೆ.
ಮಹಾತ್ಮ್ಯ
ಬ್ರಹ್ಮವೈವರ್ತ ಪುರಾಣ ಇದನ್ನು ಯುಧಿಷ್ಠಿರನಿಗೆ ಕೃಷ್ಣ ಹೇಳಿದ ರೂಪದಲ್ಲಿ ಕೊಡುತ್ತದೆ. ಮುಚುಕುಂದ ರಾಜನ ಮಗಳು ಚಂದ್ರಭಾಗೆಯನ್ನು ಚಂದ್ರಸೇನನ ಮಗ ಶೋಭನನಿಗೆ ಕೊಟ್ಟಿದ್ದರು. ಶೋಭನನಿಗೆ ಒಂದು ದಿನದ ಉಪವಾಸ ಸಹಿಸುವ ಶಕ್ತಿ ಇರಲಿಲ್ಲ; ಆದರೂ ವ್ರತ ಮಾಡಿ ಪ್ರಾಣ ಬಿಟ್ಟ. ಅವನಿಗೆ ದೊರೆತ ಫಲ ಮಂದರ ಪರ್ವತದ ಮೇಲಿನ ಒಂದು ನಗರ ಎಂದು ಪುರಾಣ ಹೇಳುತ್ತದೆ; ಶ್ರದ್ಧೆಯಿಲ್ಲದೆ ಮಾಡಿದ ವ್ರತವಾದ್ದರಿಂದ ಅದು ಮೊದಲಿಗೆ ಅಸ್ಥಿರವಾಗಿತ್ತು, ಪತ್ನಿ ತನ್ನ ವ್ರತಗಳ ಫಲವನ್ನು ಅವನಿಗೆ ಧಾರೆ ಎರೆದ ಮೇಲೆ ಸ್ಥಿರವಾಯಿತು. ದೇಹ ದುರ್ಬಲವಿದ್ದರೂ ವ್ರತಕ್ಕೆ ಬೆಲೆ ಇದೆ ಎಂಬುದು, ಮತ್ತು ಫಲವನ್ನು ಇನ್ನೊಬ್ಬರಿಗೆ ಕೊಡಬಹುದು ಎಂಬುದು, ಕಥೆ ಹೇಳಲು ಹೊರಟ ಎರಡು ಸಂಗತಿಗಳು.
ಆಚರಣೆಯಲ್ಲಿ
ಉಳಿದ ಏಕಾದಶಿಗಳಿಂದ ಇದನ್ನು ಬೇರೆ ಮಾಡುವ ಅಂಶ ಹೆಚ್ಚಿಲ್ಲ. ಕರ್ನಾಟಕದಲ್ಲಿ ಏಕಾದಶಿ ಆಚರಿಸುವ ಮನೆಗಳು ಇದನ್ನೂ ಎಂದಿನಂತೆ ಆಚರಿಸುತ್ತವೆ. ಇದರ ನಿಜವಾದ ವಿಶೇಷ ಎಂದರೆ ಪಂಚಾಂಗದಲ್ಲಿ ಅದು ನಿಂತಿರುವ ಜಾಗ: ನರಕ ಚತುರ್ದಶಿ ಮತ್ತು ದೀಪಾವಳಿಯ ಸಾಲಿಗೆ ಕೆಲವೇ ದಿನ ಮೊದಲು. ಇದಕ್ಕಿಂತ ಹೆಚ್ಚಿನ ಮಹತ್ವ ಎಲ್ಲಾದರೂ ಕಂಡರೆ ಅದು ಋತುವಿನಿಂದ ಬಂದದ್ದೇ ಹೊರತು ಆಚರಣೆಯಿಂದ ಅಲ್ಲ.
ಉಪವಾಸದ ನಿಯಮ, ಮರುದಿನದ ದ್ವಾದಶಿಯ ಪಾರಣೆಯ ಸಮಯ, ವಿದ್ಧ ಏಕಾದಶಿಯ ಪ್ರಶ್ನೆ ಇವೆಲ್ಲ ಏಕಾದಶಿ ಕುರಿತ ಸಾಮಾನ್ಯ ಲೇಖನದಲ್ಲಿವೆ.
Rama Ekadashi is the eleventh tithi of the dark fortnight of Ashwina, the last ekadashi to fall before Deepavali. In the amanta reckoning used in Karnataka it belongs to Ashwina. The purnimanta calendars of North India put the same day in Kartika, and it is often listed there under that month. The tithi is the same and the day is the same; only the month label differs.
The name
The Rama of this ekadashi is Ramaa, a name of Lakshmi, with the first vowel long. It is not Rama the son of Dasharatha, and the two are confused often enough to be worth separating. The fortnight this tithi belongs to runs down to Deepavali and the worship of Lakshmi, so the name sits where it belongs.
What is told of it
The Brahmavaivarta Purana gives the mahatmya as an answer of Krishna to Yudhishthira. Chandrabhaga, daughter of king Muchukunda, was married to Shobhana, son of Chandrasena. Shobhana had no strength for a day without food, kept this fast nonetheless, and did not survive it. The phala said to follow was a city of his own on the Mandara mountain, insubstantial at first because the vrata had been kept without full conviction, and made solid when his wife made over to him the merit of her own observance. The purana offers the story as an argument on two points: that the fast counts even when the body is weak, and that its merit can be given to another.
In practice
Little separates Rama Ekadashi from the others. Households in Karnataka that keep ekadashi keep this one in the ordinary way, and its real distinction is its position in the calendar, a few days before Naraka Chaturdashi and the Deepavali sequence. Where an almanac gives it more weight than that, the weight is coming from the season around it rather than from anything in the observance itself.
The rules of the fast, the timing of the parana on the following dwadashi and the question of a viddha ekadashi are set out in the general post on ekadashi.
