ಅವಸರಪಠಿತಂ ಸರ್ವಂ: ಸಮಯಕ್ಕೆ ಹೇಳಿದರೆ ಎಲ್ಲವೂ ಸುಭಾಷಿತ

ಅವಸರಪಠಿತಂ ಸರ್ವಂ ಸುಭಾಷಿತ: ಸರಿಯಾದ ಸಮಯದಲ್ಲಿ ಹೇಳಿದ ಸಾಮಾನ್ಯ ಮಾತೂ ಸುಭಾಷಿತವಾಗುತ್ತದೆ. ಕನ್ನಡ, ದೇವನಾಗರಿ ಮತ್ತು English IAST ಪಾಠ, ಪದಶಃ ಅರ್ಥ ಮತ್ತು ವಿವರಣೆ.

ಅವಸರಪಠಿತಂ ಸರ್ವಂ, ಸುಭಾಷಿತ ರತ್ನಗಳು, ಜೀವನ ಸೂತ್ರ

ಒಂದು ಮಾತಿನ ಬೆಲೆ ಅದರ ಪದಗಳಲ್ಲಿ ಮಾತ್ರವಲ್ಲ, ಅದನ್ನು ಹೇಳಿದ ಹೊತ್ತಿನಲ್ಲೂ ಇರುತ್ತದೆ.

ಹಸಿದವನಿಗೆ ಒರಟು ಊಟವೂ ರುಚಿಯಾಗಿರುವಂತೆ, ಸಮಯಕ್ಕೆ ಹೇಳಿದ ಸಾಮಾನ್ಯ ಮಾತೂ ಸುಭಾಷಿತವಾಗುತ್ತದೆ ಎನ್ನುತ್ತದೆ ಈ ಆರ್ಯಾ ಪದ್ಯ.

ಮೂಲ: ಸುಭಾಷಿತರತ್ನಭಾಂಡಾಗಾರ, ಸಾಮಾನ್ಯ ಪ್ರಕರಣ, ಸುಭಾಷಿತಪ್ರಶಂಸಾ, ಶ್ಲೋಕ 15 · Subhashitaratnabhandagara, Samanya Prakarana, In Praise of Fine Sayings, verse 15

ವಿಷಯ: ಮಾತಿಗೆ ಸಮಯದ ಮಹತ್ವ · The importance of timing in speech

ಛಂದಸ್ಸು: ಆರ್ಯಾ · Arya


ಸುಭಾಷಿತ (ಕನ್ನಡ)

ಅವಸರಪಠಿತಂ ಸರ್ವಂ ಸುಭಾಷಿತತ್ವಂ ಪ್ರಯಾತ್ಯಸೂಕ್ತಮಪಿ ।
ಕ್ಷುಧಿ ಕದಶನಮಪಿ ನಿತರಾಂ ಭೋಕ್ತುಃ ಸಂಪದ್ಯತೇ ಸ್ವಾದು ॥

ಸುಭಾಷಿತ (ದೇವನಾಗರಿ)

अवसरपठितं सर्वं सुभाषितत्वं प्रयात्यसूक्तमपि ।
क्षुधि कदशनमपि नितरां भोक्तुः संपद्यते स्वादु ॥

ಸುಭಾಷಿತ (English IAST)

avasarapaṭhitaṃ sarvaṃ subhāṣitatvaṃ prayātyasūktamapi |
kṣudhi kadaśanamapi nitarāṃ bhoktuḥ saṃpadyate svādu ||

ಪದಶಃ ಅರ್ಥ

  • ಅವಸರಪಠಿತಮ್ (अवसरपठितम्, avasarapaṭhitam) = ಸರಿಯಾದ ಸಮಯದಲ್ಲಿ ಹೇಳಿದ (spoken at the right moment)
  • ಸರ್ವಮ್ (सर्वम्, sarvam) = ಎಲ್ಲವೂ (everything)
  • ಸುಭಾಷಿತತ್ವಮ್ (सुभाषितत्वम्, subhāṣitatvam) = ಸುಭಾಷಿತದ ಸ್ಥಾನವನ್ನು (the status of a fine saying)
  • ಪ್ರಯಾತಿ (प्रयाति, prayāti) = ಹೊಂದುತ್ತದೆ (attains)
  • ಅಸೂಕ್ತಮ್ ಅಪಿ (असूक्तम् अपि, asūktam api) = ಚೆನ್ನಾಗಿ ಹೇಳದ ಮಾತೂ (even what is not finely said)
  • ಕ್ಷುಧಿ (क्षुधि, kṣudhi) = ಹಸಿವಿನಲ್ಲಿ (when hungry)
  • ಕದಶನಮ್ ಅಪಿ (कदशनम् अपि, kadaśanam api) = ಕೆಟ್ಟ ಊಟವೂ (even poor food)
  • ನಿತರಾಮ್ (नितराम्, nitarām) = ಬಹಳ (very)
  • ಭೋಕ್ತುಃ (भोक्तुः, bhoktuḥ) = ಉಣ್ಣುವವನಿಗೆ (for the eater)
  • ಸಂಪದ್ಯತೇ (संपद्यते, saṃpadyate) = ಆಗುತ್ತದೆ (becomes)
  • ಸ್ವಾದು (स्वादु, svādu) = ರುಚಿಯಾದುದು (tasty)

ಸಂಪೂರ್ಣ ಅರ್ಥ (ಕನ್ನಡ)

ಸರಿಯಾದ ಸಮಯದಲ್ಲಿ ಹೇಳಿದರೆ, ಚೆನ್ನಾಗಿ ಹೇಳದ ಮಾತೂ ಸುಭಾಷಿತವಾಗುತ್ತದೆ. ಹಸಿದಾಗ ಉಣ್ಣುವವನಿಗೆ ಒರಟು ಊಟವೂ ಬಹಳ ರುಚಿಯಾಗುತ್ತದೆ.

ಸಂಪೂರ್ಣ ಅರ್ಥ (ಇಂಗ್ಲಿಷ್)

Spoken at the right moment, everything becomes a fine saying, even what is not finely put. To one who eats when hungry, even poor food becomes very tasty.

ಈ ಸುಭಾಷಿತದ ಬಗ್ಗೆAbout this subhashita

ಇದೊಂದು ದೃಷ್ಟಾಂತ ಅಲಂಕಾರದ ಉದಾಹರಣೆ. ಮೊದಲರ್ಧದ ಮಾತನ್ನು ಎರಡನೆಯ ಅರ್ಧದ ಬದುಕಿನ ಉದಾಹರಣೆ ಸ್ಪಷ್ಟಪಡಿಸುತ್ತದೆ.

This is an instance of drishtanta, illustration. The everyday example in the second half makes the statement of the first half clear.

ಅವಸರ ಎಂಬ ಪದ ಸಂಸ್ಕೃತದಲ್ಲಿ ಸರಿಯಾದ ಸಂದರ್ಭ, ತಕ್ಕ ಹೊತ್ತು ಎಂಬ ಅರ್ಥ ಕೊಡುತ್ತದೆ. ಕನ್ನಡದ ಆತುರ ಎಂಬ ಅರ್ಥ ಇಲ್ಲಿ ಇಲ್ಲ.

In Sanskrit avasara means the fitting occasion, the right time. The Kannada sense of haste does not apply here.

ಆಧಾರ: ಸುಭಾಷಿತರತ್ನಭಾಂಡಾಗಾರ, ಸಾಮಾನ್ಯ ಪ್ರಕರಣ (ನಿರ್ಣಯಸಾಗರ ಮುದ್ರಣಾಲಯ, ಮುಂಬಯಿ), ಪುಟ 29. ಶ್ಲೋಕದ ಪಾಠವನ್ನು ಮುದ್ರಿತ ಪ್ರತಿಯ ಸ್ಕ್ಯಾನ್‌ನೊಂದಿಗೆ ಅಕ್ಷರಶಃ ಹೋಲಿಸಿದ್ದೇವೆ. ಅರ್ಥ ಮತ್ತು ವಿವರಣೆ ನಮ್ಮದು.

Source: Subhashitaratnabhandagara, Samanya Prakarana (Nirnaya Sagar Press, Bombay), page 29. The text of the verse was checked letter by letter against a scan of the printed book. The meaning and notes are ours.

ಇಂದಿನ ಬದುಕಿಗೆFor life today

ಸರಿಯಾದ ಮಾತನ್ನು ತಪ್ಪು ಹೊತ್ತಿನಲ್ಲಿ ಹೇಳಿದರೆ ಅದು ನೋವು ಕೊಡಬಹುದು. ಸಾವಿನ ಮನೆಯಲ್ಲಿ ತತ್ವಜ್ಞಾನಕ್ಕಿಂತ ಮೌನವಾಗಿ ಜೊತೆಗೆ ಕುಳಿತುಕೊಳ್ಳುವುದೇ ಹೆಚ್ಚು ಸಾಂತ್ವನ ಕೊಡುತ್ತದೆ.

A right word at the wrong time can hurt. In a house of mourning, sitting quietly beside someone comforts more than philosophy.

ಮಕ್ಕಳಿಗೆ ಬುದ್ಧಿಮಾತು ಹೇಳುವಾಗಲೂ ಹೀಗೆಯೇ. ಅವರು ಕೇಳಲು ಸಿದ್ಧರಾಗಿರುವ ಹೊತ್ತಿನಲ್ಲಿ ಹೇಳಿದ ಒಂದು ಸಾಲು ಹತ್ತು ಉಪದೇಶಗಳಿಗಿಂತ ಹೆಚ್ಚು ಕೆಲಸ ಮಾಡುತ್ತದೆ.

So too with advice to children. One line said when they are ready to listen does more than ten sermons.


ಸುಭಾಷಿತರತ್ನಭಾಂಡಾಗಾರದ ಸುಭಾಷಿತಗಳು, ಪುಸ್ತಕದ ಕ್ರಮದಲ್ಲಿ: ಸುಭಾಷಿತ ರತ್ನಗಳು

Fine sayings from the Subhashitaratnabhandagara, in the order of the book

ಸುಭಾಷಿತ ಎಂದರೇನು ಎಂಬ ಪರಿಚಯಕ್ಕೆ: ಬದುಕನ್ನು ಹಿಡಿದಿಡುವ ನುಡಿಗನ್ನಡಿ

For an introduction to what a subhashita is: our opening essay


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ